ಹುಲಿವೇಷ ಕಲಾವಿದನ ಮೈಮೇಲೆ ದೈವ ಆವಾಹನೆ – ಬೊಕ್ಕಪಟ್ಟಣದಲ್ಲಿ ಮೈಜುಮ್ಮೆನಿಸುವ ಘಟನೆ

ಮಂಗಳೂರು: ಹುಲಿವೇಷ ಕಲಾವಿದನ ಮೇಲೆ ದೈವ ಆವಾಹನೆಯಾಗಿರುವ ಘಟನೆ ಮಂಗಳೂರಿನ ಬೊಕ್ಕಪಟ್ಟಣದಲ್ಲಿ ನಡೆದಿದೆ‌. ಬೊಕ್ಕಪಟ್ಟಣ ಶಿವ ಫ್ರೆಂಡ್ಸ್‌ನ ಹುಲಿವೇಷದ ಊದುಪೂಜೆ ಕಾರ್ಯಕ್ರಮದಲ್ಲಿ ನಡೆದಿದೆ.

ಹುಲಿವೇಷ ಹಾಕುವುದಕ್ಕಿಂತ ಮೊದಲು ಆರಾಧನೆಯ ಭಾಗವಾಗಿ ಈ ಊದುಪೂಜೆ ನಡೆಯುತ್ತದೆ. ಈ ಸಂದರ್ಭದಲ್ಲಿ ಹುಲಿವೇಷ ಬಣ್ಣಧಾರಣೆ ಮಾಡದೆ ಹುಲಿವೇಷದ ನರ್ತನ ಸೇವೆ ಇರುತ್ತದೆ. ಹೀಗೆ ಕುಣಿಯುವ ವೇಳೆ ಕಲಾವಿದನ ಮೇಲೆ ದೈವ ಆವಾಹನೆಯಾಗಿದೆ. ನಟ ರಾಜ್ ಬಿ. ಶೆಟ್ಟಿ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ನಾಲ್ಕೈದು ಮಂದಿ ಹಿಡಿದುಕೊಂಡಿದ್ದರೂ ಆವಾಹನೆಯಾಗಿದ್ದ ಯುವಕನನ್ನು ನಿಯಂತ್ರಿಸಲು ಸಾಧ್ಯವಾಗದೆ ಇದ್ದ ದೃಶ್ಯ ನೋಡುವಾಗ ಮೈಜುಮ್ಮೆನಿಸುತ್ತಿತ್ತು ಎಂಬುವುದು ಅಲ್ಲಿದ್ದವರ ಅನುಭವ. ಬಳಿಕ ಹಿರಿಯರೊಬ್ಬರು ಸಾಂತ್ವನ ಮಾಡಿ ನೀರು ಚಿಮುಕಿಸಿದ ನಂತರ ಆತ ಸಹಜ ಸ್ಥಿತಿಗೆ ಬಂದಿದ್ದಾನೆ‌. ಉಡುಪಿಯಲ್ಲಿ ವಿಟ್ಲಪಿಂಡಿ ಸಮಯದಲ್ಲೂ ಇಂತಹದ್ದೊಂದು ಘಟನೆ ನಡೆದಿತ್ತು.

LEAVE A REPLY

Please enter your comment!
Please enter your name here