ಸೋಮೇಶ್ವರ ಬಳಿ ಸಮುದ್ರ ಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ

ಮಂಗಳೂರು(ಉಳ್ಳಾಲ): ಸಮುದ್ರ ಕಿನಾರೆಯಲ್ಲಿ ನೀರಾಟಕ್ಕಿಳಿದು ಡಿ.9ರಂದು ಸಮುದ್ರ ಪಾಲಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತ ದೇಹ ಸೋಮೇಶ್ವರ ಬಳಿ ಡಿ.10ರ ಬೆಳಿಗ್ಗೆ ಪತ್ತೆಯಾಗಿದೆ.

ಸೋಮೇಶ್ವರದ ಕಾಲೇಜೊಂದರ ಆರು ಮಂದಿ ವಿದ್ಯಾರ್ಥಿಗಳು ಶನಿವಾರ ಬೀಚ್ ಗೆ ತೆರಳಿದ್ದರು. ಈ ವೇಳೆ ನೀರಿಗಿಳಿದಿದ್ದ ದ್ವಿತೀಯ ಪಿಯು ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಾದ ಮಂಜೇಶ್ವರ, ಕುಂಜತ್ತೂರು ಅಡ್ಕ ನಿವಾಸಿ ಯಶ್ವಿತ್ (17) ಮತ್ತು ಕುಂಜತ್ತೂರು ಮಜಲ್ ನಿವಾಸಿ ಯುವರಾಜ್(17) ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಕೊಂಡು ಹೋಗಿದ್ದರು. ನಾಪತ್ತೆಯಾಗಿದ್ದ ಇಬ್ಬರ‌ ಮೃತದೇಹ ಪತ್ತೆಗಾಗಿ ಅಗ್ನಿ ಶಾಮಕ ದಳ ಹಾಗೂ ಉಳ್ಳಾಲ ಪೊಲೀಸರು ಶನಿವಾರ ರಾತ್ರಿ ವೇಳೆ ಬಟ್ಟಪ್ಪಾಡಿ, ಉಚ್ಚಿಲ ಪ್ರದೇಶದಲ್ಲಿ ಶೋಧ ನಡೆಸಿದ್ದರು. ಇವರ ಜೊತೆ ಮೊಗವೀರ ಪಟ್ನದ ಕೆಲವು ಈಜುಗಾರರು ಶೋಧ ಕಾರ್ಯದಲ್ಲಿ ಪೊಲೀಸರ‌ ಜತೆ‌ ಕೈಜೋಡಿಸಿದ್ದರು. ಇಂದು ಬೆಳಗ್ಗೆ ಮೃತ ದೇಹಗಳು ಪತ್ತೆಯಾಗಿದೆ.

LEAVE A REPLY

Please enter your comment!
Please enter your name here