ಚಾರಣಕ್ಕೆಂದು ಚಾರ್ಮಾಡಿಗೆ ತೆರಳಿ ನಾಪತ್ತೆಯಾದ ಯುವಕ – ಕಾಡಿನ ಮಧ್ಯೆ ಯುವಕನನ್ನು ಪತ್ತೆ ಹಚ್ಚಿದ ಪೊಲೀಸರು

ಮಂಗಳೂರು/ಬೆಳ್ತಂಗಡಿ: ಚಾರಣಕ್ಕೆಂದು ಚಾರ್ಮಾಡಿಗೆ ತೆರಳಿ ನಾಪತ್ತೆಯಾಗಿದ್ದ ಯುವಕ ಪತ್ತೆಯಾಗಿದ್ದಾನೆ.

ಮೂಡಿಗೆರೆಯ ಬಲ್ಲಾಳರಾಯನ ದುರ್ಗದಿಂದ ಹತ್ತು ಮಂದಿ ಯುವಕರ ತಂಡ ಬೆಳ್ತಂಗಡಿಯ ಚಾರ್ಮಾಡಿಯ ಬಂಡಾಜೆ ಫಾಲ್ಸ್ ಗೆ ಫೆ.25ರಂದು ಚಾರಣಕ್ಕೆ ತೆರಳಿದ್ದರು. ಕೆಎಂಸಿ ಆಸ್ಪತ್ರೆಯ ಎಂಬಿಬಿಎಸ್ ವಿದ್ಯಾರ್ಥಿಗಳ ಈ ತಂಡದಲ್ಲಿದ್ದ ಧನುಷ್ ಎಂಬಾತ ಈ ವೇಳೆ ನಾಪತ್ತೆಯಾಗಿದ್ದು,  ಮೊಬೈಲ್ ಸ್ವಿಚ್ ಆಫ್ ಆಗಿದೆ.

ತಂಡದಲ್ಲಿದ್ದ ಆದಿತ್ಯ ಎಂಬ ಯುವಕ ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ತಂಡದ ಉಳಿದ ವಿದ್ಯಾರ್ಥಿಗಳನ್ನು ವಿಚಾರಿಸಿ ಮಾಹಿತಿ ಪಡೆದು ನಿರ್ದಿಷ್ಟ ಜಾಗದಲ್ಲಿ ಸುಮಾರು ಮೂರುವರೆ ಗಂಟೆಗಳ ಕಾಲ ಹುಡುಕಾಟ ನಡೆಸಿದ್ದಾರೆ. ಕೊನೆಗೂ ಗುಡ್ಡ ಭಾಗದ 700 ಅಡಿ ದೂರದಲ್ಲಿ ದಟ್ಟವಾದ ಕಾಡಿನ ಮಧ್ಯೆ ಆತನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸುರಕ್ಷಿತವಾಗಿ ಆತನನ್ನು ಕರೆತಂದ ಪೊಲೀಸರು ತಂಡದೊಂದಿಗೆ ಕಳುಹಿಸಿಕೊಟ್ಟಿದ್ದಾರೆ.

 

LEAVE A REPLY

Please enter your comment!
Please enter your name here