ಮಂಗಳೂರಿನ ಹೆಸರಾಂತ ಒಲಿಂಪಿಕ್ ಸ್ಪೋರ್ಟ್ಸ್ ನವೀಕೃತ ನೂತನ ಮಳಿಗೆ ಶುಭಾರಂಭ

ಮಂಗಳೂರು: ಕಳೆದ ಹನ್ನೆರಡು ವರ್ಷಗಳಿಂದ ದಕ್ಷಿಣ ಕನ್ನಡ, ಉಡುಪಿ, ಕುಂದಾಪುರದಲ್ಲಿ ಕ್ರೀಡಾ ಸಲಕರಣೆಗಳ ಮಾರಾಟದಲ್ಲಿ ಗುಣಮಟ್ಟದ ಸೇವೆ ನೀಡುತ್ತಿರುವ ಒಲಿಂಪಿಕ್ ಸ್ಪೋರ್ಟ್ಸ್ ನ ಪ್ರಧಾನ ನವೀಕೃತ ಶಾಖೆ ಮಂಗಳೂರು ನಗರದ ಹೃದಯ ಭಾಗದ ಸರ್ವಿಸ್ ಬಸ್ ನಿಲ್ದಾಣ ಮುಂಭಾಗದ ವಿಜಯದೀಪ್ ಆರ್ಕೇಡ್ ನಲ್ಲಿ ಶುಭಾರಂಭಗೊಂಡಿದೆ.

ನವೀಕೃತ ನೂತನ ಒಲಿಂಪಿಕ್ ಸ್ಪೋರ್ಟ್ಸ್ ಮಳಿಗೆಗೆ ಭಾರತದ ಮಾಜಿ ಹಾಕಿ ಕಪ್ತಾನ, ಅರ್ಜುನ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಧನ್‌ರಾಜ್‌ ಪಿಳ್ಳೆ ಮತ್ತು ಭಾರತದ ಮಾಜಿ ಹಾಕಿ ಆಟಗಾರ ಲೇನ್ ಅಯ್ಯಪ್ಪ ಮಳಿಗೆ ಉದ್ಘಾಟಿಸಿ ಶುಭ ಹಾರೈಸಿದರು.

ನವೀಕೃತ ನೂತನ ಒಲಿಂಪಿಕ್ ಸ್ಪೋರ್ಟ್ಸ್ ಸಂಸ್ಥೆಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಶಮೀರ್ ಖಾದರ್ ಮಾತನಾಡಿ, ಕಳೆದ ಹನ್ನೆರಡು ವರ್ಷಗಳಿಂದ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಯೂ ಗುಣಮಟ್ಟದ ಸೇವೆಯನ್ನು ಸಂಸ್ಥೆಯ ನಿರ್ದೇಶಕರಾದ ಮಹಮ್ಮದ್ ಶರೀಫ್, ನಿಝಾಮುದ್ದೀನ್ ಅಬ್ದುಲ್ ಖಾದರ್ ಟಿ. ಸಹಕಾರದೊಂದಿಗೆ ನೀಡುತ್ತಾ ಬಂದಿದೆ. ಒಲಂಪಿಕ್ ಸ್ಪೋರ್ಟ್ಸ್ ನಲ್ಲಿ ಕಷ್ಟಮೈಸ್ ಜರ್ಸಿ, ಟ್ರೋಫಿಗಳು ಸೇರಿದಂತೆ ಅತ್ಯಾಕರ್ಷಕ ಶೈಲಿಯ ಗುಣಮಟ್ಟದ ಕ್ರೀಡಾ ಸಲಕರಣೆಗಳು ಲಭ್ಯವಿದ್ದು ಸಾರ್ವಜನಿಕರ  ಸಹಕಾರ ಅಗತ್ಯ ನೀಡಬೇಕೆಂದರು.

LEAVE A REPLY

Please enter your comment!
Please enter your name here