ಕರಾವಳಿ ವಲಯ ಸಿಟಿ ಬಸ್‌ ಒಕ್ಕೂಟದ ಸದಸ್ಯ, ಖಾಸಗಿ ಬಸ್ ಮಾಲೀಕರ ಪುತ್ರ ಪ್ರಜ್ವಲ್‌ ನೇಣಿಗೆ ಶರಣು

ಮಂಗಳೂರು: ಖಾಸಗಿ ಬಸ್ ಮಾಲೀಕರೊಬ್ಬರ ಪುತ್ರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪಡೀಲ್ ನ ಭವಾನಿ ಮೋಟರ್ ನ ಮಾಲಕ ದಿವಂಗತ ದೇವೇಂದ್ರ ಅವರ ಎರಡನೇ ಪುತ್ರ ಪ್ರಜ್ವಲ್ ಡಿ.ಕೆ.(35) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ.

ಪ್ರಜ್ವಲ್ ಇಂದು ಮುಂಜಾನೆ ವೇಳೆ ಬಜಾಲ್ ಜೆ.ಎಂ.ರೋಡ್ ನಲ್ಲಿರುವ ಸ್ವಗೃಹದಲ್ಲಿ ಫ್ಯಾನ್ ಗೆ ನೇತು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಜ್ವಲ್‌ ಕರಾವಳಿ ವಲಯ ಸಿಟಿ ಬಸ್‌ ಒಕ್ಕೂಟದ ಸದಸ್ಯರಾಗಿದ್ದರು.

 

LEAVE A REPLY

Please enter your comment!
Please enter your name here