ʼತಲೆಮರೆಸಿಕೊಂಡ’ ಖ್ಯಾತ ನಟಿ ಜಯಪ್ರದಾ-ಮಾ.6ರ ಒಳಗೆ ಹಾಜರುಪಡಿಸುವಂತೆ ಕೋರ್ಟ್ ಸೂಚನೆ

ಮಂಗಳೂರು(ನವದೆಹಲಿ): ಖ್ಯಾತ ನಟಿ, ಮಾಜಿ ಸಂಸದೆ, ಬಿಜೆಪಿ ನಾಯಕಿ ಜಯಪ್ರದಾ ಅವರನ್ನು ರಾಂಪುರದ ವಿಶೇಷ ನ್ಯಾಯಾಲಯ ʼತಲೆಮರೆಸಿಕೊಂಡಿರುವವರು’ ಎಂದು ಘೋಷಿಸಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಂಪುರದಿಂದ ಸ್ಪರ್ಧಿಸಿದ್ದ ಜಯಪ್ರದಾ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಎರಡು ಕೇಸ್‌ಗಳು ದಾಖಲಾಗಿದ್ದು ಈ ಪ್ರಕರಣಗಳ ವಿಚಾರಣೆಯನ್ನು ಎಂಪಿ, ಎಂಎಲ್‌ಎಗಳ ನ್ಯಾಯಾಲಯ ನಡೆಸುತ್ತಿದೆ. ಆದರೆ 7 ಬಾರಿ ಜಾಮೀನು ರಹಿತ ವಾರಂಟ್‌ ಹೊರಡಿಸಿದ್ದರೂ ಜಯಪ್ರದಾ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವವರು ಎಂದು ಘೋಷಿಸಿರುವ ನ್ಯಾಯಾಲಯ, ಮಾ.6ರ ಒಳಗೆ ಹಾಜರುಪಡಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದೆ.

LEAVE A REPLY

Please enter your comment!
Please enter your name here