ಹಾಡಹಗಲೇ ಮಾರಕಾಸ್ತ್ರದಿಂದ ಡೆಡ್ಲಿ ಅಟ್ಯಾಕ್-ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮಂಗಳೂರು(ಹೈದರಾಬಾದ್): ಹಾಡಹಗಲೇ ಹೋಟೆಲ್​ನಲ್ಲಿ ಕುಳಿತ್ತಿದ್ದ ವ್ಯಕ್ತಿಯ ಮೇಲೆ ರಾಡ್​ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್ ಗಚ್ಚಿಬೌಲಿಯಲ್ಲಿ ನಡೆದಿದೆ.

ಗಚ್ಚಿಬೌಲಿಯ ಹೊಟೇಲ್ ಮಾಲೀಕ 54 ವರ್ಷದ ಶ್ರೀನಿವಾಸ್ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಶಿವ ಎಂಬಾತ ವೈಯಕ್ತಿಕ ದ್ವೇಷದಿಂದ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಹಲ್ಲೆಗೊಳಗಾದ ಶ್ರೀನಿವಾಸ್​ನನ್ನು ತಕ್ಷಣವೇ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಸಿಸಿಟಿವಿ ವಿಡಿಯೋ ಪ್ರಕಾರ, ಮಾಲೀಕ ಎನ್ನಲಾಗಿರುವ ಶ್ರೀನಿವಾಸ್ ಹೋಟೆಲ್​ನಲ್ಲಿ ಕೂತಿರುತ್ತಾರೆ. ಈ ವೇಳೆಗೆ ಉದ್ದವಾದ ರಾಡ್ ಹಿಡಿದು ವ್ಯಕ್ತಿಯೊಬ್ಬ ಹೋಟೆಲ್​ ಒಳಗೆ ನುಗ್ಗುತ್ತಾನೆ. ಏಕಾಏಕಿ ಬಂದ ಆತ, ಶ್ರೀನಿವಾಸ್​ ಮೇಲೆ ಹಲ್ಲೆ ಮಾಡಿದ್ದಾನೆ. ಇದನ್ನು ಗಮನಿಸಿದ ಮತ್ತೋರ್ವ ಸಿಬ್ಬಂದಿ, ಆತನಿಂದ ತಪ್ಪಿಸುವ ಪ್ರಯತ್ನ ಮಾಡಿದ್ದಾನೆ. ಓಡಿ ಹೋಗಿ ಹಲ್ಲೆ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡಿದ್ದಾನೆ. ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ವೇಳೆ ಮತ್ತೋರ್ವ ವ್ಯಕ್ತಿ ತನ್ನ ಪ್ರಾಣವನ್ನೂ ಲೆಕ್ಕಿಸದೇ ಕಾಪಾಡಲು ಪ್ರಯತ್ನಿಸಿರೋದು ಮೆಚ್ಚುಗೆಗೆ ಕಾರಣವಾಗಿದೆ. ಪೊಲೀಸರು ಶ್ರೀನಿವಾಸ್ ಕುಟುಂಬದವರು ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here